Thursday, April 22, 2010

ಗದುಗಿನ ಪದ್ದು


"ದಿಲ್ ನೆ ಏ ಕಹಾ ಹೈ ದಿಲ್ ಸೆ ......
ಮೊಹಬ್ಬತ್ ಹೋ ಗಯಿ ಹೈ ತುಮ್ಸೆ ....
ಮೇರಿ ಜಾನ್ ಮೇರಿ ದಿಲ್ ಬರ್,

ಕಿತನಾ ಬೆಕರಾರ್ ಹ್ಮೋ ಮೈ
ಕಿತನಾ ಬೆಕರಾರ್ ಹೈ ತುಂ

ತುಂ ಬಿ ಮುಜಸೇ ಪ್ಯಾರ್ ಕರ್ ಲೋ"

ಆಹಾ ಓರೇಗಣ್ನಲ್ಲಿ ನನ್ನ ನೋಡ್ತಾ ಏನ್ ಚೆಂದ ಹಾಡ್ತಿದ್ದಿ ಪದ್ದು, ನಿನ್ನನ್ನಿವಾಗ್ಲೂ ನೆನ್ಸ್ಕೊಂಡ್ರೆ ಮೈ ಝುಂ ಅನ್ನುತ್ತೆ. ಅದೇನ್ ಧೈರ್ಯ ನಿನಗೆ ಹಾಂ ?

"೨೪ನೇ ತಾರೀಖಿಗೆ ನನ್ ಮದಿವಿ ಐತಿ ಒಂದ್ ವಾರ್ ಮುಂಚೆಗನ ಬಂದ್ ಬಿಡು" ಅಂತ ಗದುಗಿನಿಂದ ನನ್ನ ಗೆಳೆಯನ ಪತ್ರ ಬಂದಿತ್ತು. ನಾನಾವಾಗ ಹಳಿಯಾಳ್ ತಾಲೂಕ್ ಹುಣ್ಸವಾಡದಾಗ ರಿಮ್ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದೆ.


ಮೂಕನಾದನು ಮಂಜ

ಮೂಕನಾದನು ಮಂಜ

Wednesday, April 21, 2010

ತಡಕೊಡದ ಮಟಗುಡ್ಲಿ ಮಾವ



ಇಲ್ಲಿ ನಾನು ನಿಮ್ಮನ್ನ ಮಾವ ಅಂತ ಕರಿಯೋದು ತಪ್ಪ ಆಗಬಹುದು, ನಾನು ನಿಮ್ಮನ ಯಾವತ್ತೂ ಅಣ್ಣಾರ ಅಂತss ಕರಕೊಂತ ಬಂದೇನಿ. ಈಗ ಒಮ್ಮಿಲೆ ಮಾವ ಅಂದ್ರ ತಪ್ಪ ಆಗುದುಲ್ಲನ ?

ನೀವು ಎಷ್ಟ ಕಟಪಟ ಬಿಟ್ರಿ ನಿಮ್ಮ ಮಗಳನ ನನಗ ಕೊಡಬೇಕಂತ, ಆದರ ನಿಮ್ಮಂತ ಒಳ್ಳೆ ಮನಿಸಿನ್ಯಾವರನ ನಾನ ಅರ್ಥ ಮಾಡ್ಕೊಲಿಲ್ಲ ಅದಕ ಕಾಣತೈತಿ ನನಗ ಹಿಂತಾ ಪರಿಸ್ಥಿತಿ ಬಂದಿದ್ದು, ನನ್ನ ಮನಿಮಟ ಬಂದಿದ್ರಿ ಮಗಳ ಕೊಡತೆನೆಂತ. ನಾ ಬ್ಯಾರೆದಾಕಿನ ಮಾಡ್ಕೊಂಡಿದ್ದಕ್ಕ ನನಗ ಹಿಂತಾ ಪರಿಸ್ಥಿತಿ ಬಂತು

ನನ್ನಾಕೆ



ಲೇಖನ ಹೇಗೆ ಶುರು ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ.

ಎಲ್ಲರೂ ಮದುವೆ ಯಾಗುತ್ತಾರೆಂದು ನಾನೂ ಮದುವೆಯಾದೆ...........

ಇವತ್ತು ಮಧ್ಯಾನ್ಹ ಉಟಕ್ಕೆ ಆಫೀಸಿಗೆ ಒಣ ಖಾರಪುಡಿ ಬಿಳಿ ಅನ್ನ ಬುತ್ತಿ ಕಟ್ಟಿದ್ದಳು. ಹಾಗಾಗಿ ಮನಸು ಒಂಥರಾ ಬೇಜಾರಲ್ಲಿದೆ,ಇನ್ನೊಂದ್ಸಲ ಬಿಡುವಿದ್ದಾಗ ಬರೀತೀನಿ. ಅಂದಂಗೆ ನನಗೆ ಶಾರ್ಟ್ ಮೆಮೊರಿ ಕೂಡ ಇದೆ ಎಷ್ಟು ನೆನಪಿರುತ್ತೋ ಅಷ್ಟು ಬರೀತೀನಿ ಸರಿನಾ ?

ನನ್ನಾಕೆಗೆ ನಾನೆಂದರೆ ಪ್ರೀತಿಯೇ ಇಲ್ಲವೇನೋ....? ಇಷ್ಟವೇ ಇಲ್ಲವೇನೋ .....? ಇದ್ದಿದ್ದರೆ ನನ್ನ ಉಟ ತಿಂಡಿಯ ಬಗ್ಗೆ ಒಳ್ಳೆ ಗಮನ ಕೊಡುತ್ತಿದ್ದಳು. ಎಲ್ಲರ ಹೆಂಡತಿಯರು ಹೀಗೆಯೇ ಇರುತ್ತಾರೆಯೇ ? ಹೌದಾದರೆ... ಎಲ್ಲ ನನ್ನ ಆತ್ಮಿಯ ಗೆಳೆಯರೇ ನೀವೆಲ್ಲ ಮದುವೆಯಾಗಬೇಡಿ, ನನಗೆ ಬಂದ ಕಷ್ಟ ನಿಮಗಾರಿಗೂ ಬರುವುದು ಬೇಡ.ನನ್ನ ಕಥೆ ಇವತ್ತೊಂದೇ ದಿನದ್ದಲ್ಲ. ಪ್ರತಿ ದಿನ ನಾ ಅನುಭವಿಸುವ ಕಷ್ಟ ಕಾರ್ಪಣ್ಯದ ತುಣುಕುಗಳನ್ನು ಇಲ್ಲಿ ಬಿಚ್ಚಿಡುತ್ತೇನೆ ನೀವೇ ನೋಡಿ. ಸಮಾಧಾನಗಳಿಗೆ ಸ್ವಾಗತ.



ಸಾವಿನ ದಾರಿ ಕಾಯುತ್ತ ಸಮಯ ಕಳೆಯುತ್ತಿರುವ ನಿನ್ನವ.